Latest News

Happenings & Events

ಕದಂಬ ಸಂಸ್ಥೆಯ ಭೂಮಿಪುತ್ರಿಯ ವತಿಯಿಂದ ಆಯೋಜಿಸಲಾಗಿದ್ದ ಮೊದಲ ಮಹಿಳಾ ಕೃಷಿ ಕೂಟ!

ಶ್ರೀ ಅನಂತಕುಮಾರ ಹೆಗಡೆಯವರು ನೆನ್ನೆಯ  ಶಿರಸಿಯಲ್ಲಿ ಕದಂಬ ಸಂಸ್ಥೆಯ ಭೂಮಿಪುತ್ರಿಯ ವತಿಯಿಂದ ಆಯೋಜಿಸಲಾಗಿದ್ದ ಮೊದಲ ಮಹಿಳಾ ಕೃಷಿ ಕೂಟದಲ್ಲಿ ಭಾಗವಹಿಸಿದರು.

ಕೃಷಿಯಲ್ಲಿ ಮಹಿಳೆಯರು ನಿರ್ವಹಿಸುವ ಪಾತ್ರದ ಪ್ರಾಮುಖ್ಯತೆಯನ್ನು ಗುರುತಿಸಲು, ಅದನ್ನು ಪ್ರಶಂಸಿಸಿ ಪ್ರೋತ್ಸಾಹಿಸಲು ಹಾಗೂ ದೇಶದ ಆರ್ಥಿಕತೆಯನ್ನು ಶಕ್ತಗೊಳಿಸಲಿಕ್ಕಾಗಿ ಸದ್ದಿಲ್ಲದೇ ದುಡಿಯುತ್ತಿರುವ ಕಾಣದ ಕೈಗಳನ್ನು ಬಲಯುತಗೊಳಿಸಲು, ಅವರ ಗೆಲುವುಗಳ ಬಗ್ಗೆ, ಅವರೆದುರಿಸುತ್ತಿರುವ ತೊಂದರೆಗಳ ಬಗ್ಗೆ, ಭವಿಷ್ಯದಲ್ಲಿ ಅವರು ಸಾಗಬೇಕಾದ ದಾರಿಯಬಗ್ಗೆ ಜನರ ಮುಂದೆ ತೆರೆದಿಡುವ ಉದ್ದೇಶದಿಂದ ಪ್ರಾರಂಭವಾಗಿರುವ ಈ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಸುರೇಶ್ ಚಂದ್ರ ಹೆಗಡೆ, ನಿರ್ದೇಶಕರು, ಕೆ ಡಿ ಸಿ ಸಿ, ಶ್ರೀಮತಿ ಸುವರ್ಣ ಭಟ್, ಪ್ರಧಾನ ಸಂಚಾಲಕರು, ಭೂಮಿಪುತ್ರಿ, ಶ್ರೀಮತಿ ಸವಿತಾ ಹೆಗಡೆ, ಅರೇಕಾ ವ್ಯಾಲಿ ಹೋಮ್ ಸ್ಟೇ, ಸಂಸ್ಥಾಪಕರು ಹಾಗೂ ಮುಂತಾದವರು ಉಪಸ್ಥಿತರಿದ್ದರು.      

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts