Latest News

Happenings & Events

ಉತ್ತರ ಕನ್ನಡ ಕ್ಷೇತ್ರದ ಖಾನಾಪುರ ತಾಲೂಕಿನ ಕೊಡಚವಾಡ ಹಾಗು ಲೊಂಡ ಗ್ರಾಮಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯ ಅವಲೋಕನೆ ನಡೆಸಿದರು.

ಉತ್ತರ ಕನ್ನಡ ಕ್ಷೇತ್ರದ ಖಾನಾಪುರ ತಾಲೂಕಿನ ಕೊಡಚವಾಡ ಹಾಗು ಲೊಂಡ ಗ್ರಾಮಗಳಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ನಿನ್ನೆಯ ದಿನ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯ ಅವಲೋಕನೆ ನಡೆಸಿದರು.

ಒಟ್ಟಾರೆ ನೆರೆ ಈಗ ಇಳಿಮುಖವಾಗಿದ್ದು, ಪರಿಸ್ಥಿತಿ ಒಂದು ಹತೋಟಿಗೆ ಬರುವ ಸೂಚನೆ ಸಿಗುತ್ತಿರುವ ಬಗ್ಗೆ ಮಾನ್ಯ ಸಂಸದರು ಈ ಸಂದರ್ಭದಲ್ಲಿ ನಿರಾಶ್ರಿತರಿಗೆ ಭರವಸೆ ನೀಡಿ ಕೂಡಲೇ ಸಮರೋಪಾದಿಯಲ್ಲಿ ಪುನರ್ವಸತಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಮೋದ ಕೊಚ್ಚೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ,  ಶ್ರೀ ಸಂಜಯ ಕುಬಾಲ, ತಾಲೂಕು ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ವಿಠಲ ಪಾಟೀಲ, ತಾಲೂಕು ಅಧ್ಯಕ್ಷರು - ಬಿಜೆಪಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts