"ವೃಕ್ಷಾರೋಪಣ" ಅಭಿಯಾನ
ಭಾರತೀಯ ಜನಸಂಘದ ಸ್ಥಾಪಕರಾದ ಶ್ರೀ ಶ್ಯಾಮಪ್ರಸಾದ ಮುಖರ್ಜಿಯವರ ಪುಣ್ಯ ಸ್ಮರಣೆಯ ಅಂಗವಾಗಿ ಭಾರತೀಯ ಜನತಾ ಪಕ್ಷವು ದೇಶದಾದ್ಯಂತ ಜೂನ್ ೨೩ ರಿಂದ ಜೂಲೈ ೦೬ ವರೆಗೆ "ವೃಕ್ಷಾರೋಪಣ" ಅಭಿಯಾನ ಹಮ್ಮಿಕೊಂಡಿದ್ದು, ಉತ್ತರಕನ್ನಡ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಕೆಳಗಿನ ಎಸಳೆ ಗ್ರಾಮದ, ಶ್ರೀ ಮಾರಿಕಾಂಬಾ ವನದಲ್ಲಿ, ಕದಂಬ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
#ಅನಂತಕುಮಾರಹೆಗಡೆ_ಕಾರ್ಯಾಲಯ