Infinite Thoughts

Thoughts beyond imagination

ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿಯವರಿಗೆ ಆ ಭಗವಂತ ಇನ್ನು ಹೆಚ್ಚಿನ ಆಯುರಾರೋಗ್ಯ ಧರ್ಮ ಸಂಸ್ಥಾಪನ ಕಾರ್ಯಗಳಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!

ಇಂದಿಗೆ ಪೂಜ್ಯ ಶ್ರೀ ಶ್ರೀ ರವಿಶಂಕರ ಗುರೂಜಿ ೬೨ ವಸಂತಗಳನ್ನು ಪೂರೈಸಿದ್ದಾರೆ.

ಪೂಜ್ಯ ಶ್ರೀಗಳು ತಮ್ಮ ಅಸಾಧಾರಣ ಆಧ್ಯಾತ್ಮಿಕ ವಿದ್ವತ್ತಿನಿಂದ ಅಪಾರ ಶಿಷ್ಯ ಸಂಪತ್ತನ್ನು ರಾಷ್ಟ್ರವಲ್ಲದೆ, ಪ್ರಪಂಚದೆಲ್ಲೆಡೆ ಗಳಿಸಿದ್ದಾರೆ. ಒಂದು ಸಂಕ್ರಮಣದ ಕಾಲಘಟ್ಟದಲ್ಲಿ ಶ್ರೀಗಳು ನಮ್ಮ ದೇಶದ ಹಲವು ತಲೆಮಾರಿನ ಜನರನ್ನು ಬಡಿದೆಬ್ಬಿಸಿ ದೇಶ, ಸನಾತನ ಧರ್ಮದೆಡೆಗೆ ಆಸಕ್ತಿವಹಿಸಿ ಆ ದಿಕ್ಕಿನೆಡೆಗೆ ಹೊರಳುವಂತೆ ಕ್ರಿಯ ಯೋಜನೆ ರೂಪಿಸಿದ ಪ್ರಾತಃ ಸ್ಮರಣೀಯ ಯತಿಗಳು. ದೇಶದ ಹಲವು ಸಂಕಷ್ಟ ಪರಿಸ್ಥಿತಿಯಲ್ಲಿ ತಾವಾಗಿ ಸ್ಪಂದಿಸಿದ ಮೇರು ಋಷಿಗಳು. ಸುದರ್ಶನ ಕ್ರಿಯಾ ಯೋಗದ ಮೂಲಕ ಸಮಾಜವನ್ನೇ ಸದೃಢಗೊಳಿಸಿದ ಮಹಾಪುರುಷರು.

ಇಂದಿನ ಈ ಶುಭ ದಿನದಂದು ಸ್ವಾಮಿಜಿಯವರಿಗೆ ಆ ಭಗವಂತ ಇನ್ನು ಹೆಚ್ಚಿನ ಆಯುರಾರೋಗ್ಯ ನೀಡಿ ಅವರಿಂದ ದೇಶ ಹಾಗೂ ಧರ್ಮ ಸಂಸ್ಥಾಪನ ಕಾರ್ಯಗಳಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ!

Related posts