Quotes





  • ರಕ್ತ ಚೆಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ,

    ಬೆವರು ಚೆಲ್ಲದೆ ಬದುಕು ಗೆಲ್ಲಲು ಸಾಧ್ಯವಿಲ್ಲ.

  • ಹುಟ್ಟು ರಾಜಕಾರಣಿಯಾಗಿರಲಿಲ್ಲ,

    ಸಾಯೂವಾಗಲೂ ರಾಜಕಾರಣಿಯಾಗಿರುವುದಿಲ್ಲ

  • ಶ್ರಮವಿಲ್ಲದ ಬದುಕು, ಅರ್ಥವಿಲ್ಲದ ಕಾವ್ಯ.

  • ಅಂತರ್ಜಾಲದಲ್ಲಿ ಅಂತರಂಗದ ಹುಡುಕಾಟ ಆರಂಭವಾದಾಗಲೇ

    ಆಂತರ್ಯ ಅನಾವರಣಗೊಳ್ಳುತ್ತದೆ

  • ಬರೆದದ್ದೆಲ್ಲ ಸಾಹಿತ್ಯವಾಗಲಾರದು ,

    ಗೀಚಿದ್ದೆಲ್ಲ ಕಾವ್ಯವೂ ಆಗಲಾರದು

  • ರಾಜಕೀಯ, ಇದೊಂದು ಸಾಮಾಜಿಕ ಹೊಣೆಗಾರಿಕೆ

    ಇದು ದುಡ್ಡಿನ ದುಡಿಮೆಯಲ್ಲ,

    ಅರ್ಥ ಸಂಪಾದನೆಯ ಅವಕಾಶವೂ ಅಲ್ಲ.

  • ದಿಕ್ಕಿಲ್ಲದ ರಾಜಕಾರಣ, ಗತಿಗೆಟ್ಟ ಸಾಮಾಜಿಕ ಜೀವನದ ಮುನ್ನುಡಿ.

    ಸಿದ್ಧಾಂತವಿಲ್ಲದ ರಾಜಕೀಯ, ಸಮಾಜದ ಸಾವಿನ ಸಂಕೇತ.

  • ಜನಪ್ರತಿನಿಧಿಗಳೆಂದರೆ ಸರಕಾರದಿಂದ ದುಡ್ಡು ಕೊಡಿಸುವ

    ದಲ್ಲಾಳಿಗಳಲ್ಲ ಬದಲಾಗಿ ಬದುಕಿನ ವರ್ತಮಾನ ಹಾಗೂ ಭವಿಷ್ಯದ

    ಚಿಂತಕರು ಅವರು, ರೂಪಕರು ಅವರು.

  • ಸಕಾರಾತ್ಮಕ ರಾಜಕಾರಣದ ಇಚ್ಛಾಶಕ್ತಿ ಇಲ್ಲದೇ ಇದ್ದರೆ ಭವಿಷ್ಯದ

    ಬದುಕು ಗುಲಾಮಿತನದ ಕರಿನೆರಳಾದೀತು, ಎಚ್ಚರ!!!

  • ಆಂತರ್ಯದ ಒಡನಾಟ ವ್ಯಕ್ತಿಯ ಅರಿವಿನ ಆಳವನ್ನು ಹೆಚ್ಚಿಸುತ್ತದೆ .