Infinite Thoughts

Thoughts beyond imagination

ಕೊರೋನಾ ಜಿಹಾದ್..! (ಭಾಗ - 5)

ಕೊರೋನಾ  ಜಿಹಾದ್..!  (ಭಾಗ ..೫)     

ಎಂಜಲು ಉಗುಳಿ ನಂಜು ಹರಡುವ ಸಂಚು...!
 
ಕೊರೋನಾ ವೈರಸ್ಸಿನ ಸೋಂಕು ಜಗತ್ತನ್ನು ಅವರಿಸುತ್ತಿದ್ದಂತೆ ಇಸ್ಲಾಮಿಕ್ ಜಿಹಾದೀ ಗುಂಪುಗಳು ಈ ಅವಕಾಶವನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು, ಆ ಮೂಲಕ ಕಾಫಿರರಿಗೆ ಸೋಂಕನ್ನು ಹಬ್ಬಿಸಲು ಮುಸ್ಲಿಮರಿಗೆ ಕರೆಕೊಟ್ಟದ್ದನ್ನು, ಅದಕ್ಕೋಸ್ಕರ ಡಿಜಿಟಲ್ ಮೀಡಿಯಾ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡದ್ದನ್ನು ಸವಿವರವಾಗಿ ಈ ಹಿಂದಿನ ಲೇಖನಗಳಲ್ಲಿ ದಾಖಲಿಸಿದ್ದೆ. ಕೊರೋನಾ ಸಾಂಕ್ರಾಮಿಕ ಖಾಯಿಲೆಯ ಕುರಿತು ಜಾಗತಿಕವಾಗಿ ಮುಸ್ಲಿಮ್ ಧಾರ್ಮಿಕ ಸಂಘಟನೆಗಳು, ಧರ್ಮ ಗುರುಗಳು ಸ್ಪಂದಿಸಿದ ರೀತಿ, ಅವರುಗಳು ನೀಡಿದ ಹೇಳಿಕೆಗಳು, ಮಾಡಿದ ಘೋಷಣೆಗಳು, ಕುಟ್ಟಿದ ಭಾಷಣಗಳು, ಕೊಟ್ಟ ಕರೆಗಳು, ಇವೆಲ್ಲವೂ ಏಕಪ್ರಕಾರವಾಗಿದ್ದವು. ಯೂರೋಪಿನ ಓರ್ವ ಮೌಲ್ವಿ ಮಾಡಿದ ಭಾಷಣಕ್ಕೂ, ಅರಬ್ ದೇಶಗಳ ಮೌಲ್ವಿ ಹೇಳಿದ್ದಕ್ಕೂ, ಆಫ್ರಿಕಾದ ಓರ್ವ ಮೌಲ್ವಿ ಮಾಡಿದ ಪ್ರವಚನಕ್ಕೂ  ಅಮೆರಿಕಾದ ಮೌಲ್ವಿ ನೀಡಿದ ಹೇಳಿಕೆಗಳಿಗೂ ಹೆಚ್ಚಿನ ವ್ಯತ್ಯಾಸಗಳಿರಲಿಲ್ಲ. ಬದಲಿಗೆ ಇವೆಲ್ಲಕ್ಕೂ ಒಂದು ಸಾಮ್ಯತೆಗಳಿದ್ದವು. ಅವುಗಳ ಹಿಂದಿನ ಉದ್ದೇಶಗಳೂ ಒಂದೇ ರೀತಿಯಾಗಿದ್ದವು! ಅಷ್ಟೇ ಯಾಕೆ ಒಂದು ಜಾಗತಿಕ ಸಮುದಾಯವಾಗಿ ಇಸ್ಲಾಂ ಈ ಮಾರಣಾಂತಿಕ ಕೊರೋನಾ ವೈರಸ್ ಸಾಂಕ್ರಾಮಿಕ ಖಾಯಿಲೆಯನ್ನು ಧಾರ್ಮಿಕ ದೃಷ್ಟಿಯಿಂದ ನೋಡಿದ್ದಂತೂ ಅತ್ಯಂತ ವಿಚಿತ್ರ ಮತ್ತು ಭಯಾನಕ ಕೂಡಾ... 
 
ಈ ರೀತಿಯ ವಿಕೃತಿ ಎಲ್ಲೋ ಅಲ್ಲೊಂದು ಕಡೆ , ಇಲ್ಲೊಂದು ಕಡೆ ಕಂಡುಬಂದಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ.... ಆದರೆ ಈ ವಿಕೃತಿ ಜಾಗತಿಕವಾಗಿ ಒಂದೇ ಸ್ತರದಲ್ಲಿ, ಒಂದೇ ಸ್ವರದಲ್ಲಿ ವ್ಯಕ್ತವಾಯಿತು..! ಭಾರತದಲ್ಲಿಯೂ ಇದು ಪ್ರಕಟವಾಯಿತು.... ಜಗತ್ತಿನ ಇತರ ಕಡೆಗಳಲ್ಲಿ ಬಹುಶಃ ಕೊರೋನಾ ಸೋಂಕಿನ ವಿಷಯ ಕೇವಲ ಭಾಷಣ, ಪ್ರವಚನಗಳಿಗೆ, ಹೇಳಿಕೆ ಮಾತುಗಳಿಗೆ ಸೀಮಿತವಾಯಿತೇನೋ ಅಂತನ್ನಿಸುತ್ತದೆ. ಆದರೆ ಭಾರತದಲ್ಲಿ ಮಾತ್ರ ಹಾಗಾಗಲಿಲ್ಲ. ಇಲ್ಲಿ ಮಾತುಗಳಲ್ಲಿಯೇ ವಿಷಯ ಮುಗಿದು ಹೋಗಲಿಲ್ಲ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೃತಿಗಳಲ್ಲಿಯೂ ಈ ವಿಕೃತಿ ಕಂಡು ಬಂತು. ಇದಕ್ಕೆಲ್ಲ ಮೂಲಕಾರಣ ಅಂತ ಕಂಡದ್ದು ತಬ್ಲೀಘಿ ಜಮಾತೇ.... ಆದರೆ ಅದನ್ನು ಹೊರತು ಪಡಿಸಿಯೂ ಅಲ್ಲಲ್ಲಿ ಕೆಲವೊಂದು ಇಸ್ಲಾಮಿಕ್ ಸಂಘಟನೆಗಳು ವಿಕೃತಿಯನ್ನು ಮೆರೆದು, ಭಾರತದಲ್ಲಿ ಭರದಲ್ಲಿ ಸೋಂಕು ಹರಡುವ ಕೆಲಸದಲ್ಲಿ ನಿರತವಾದದ್ದು ನಿಜಕ್ಕೂ ಆಘಾತಕಾರಿ. 
 
ಕೊರೋನಾ ಸೋಂಕನ್ನು ಭಾರತದ ಬಹುಸಂಖ್ಯಾಕ ಬಹುದೇವ ವಿಶ್ವಾಸಿ ಹಿಂದೂಗಳ ಮಾರಣಹೋಮ ನಡೆಸಲು ಉಪಯೋಗಿಸಬೇಕೆಂದು ಬಹಿರಂಗವಾಗಿಯೇ ಕರೆ ನೀಡಲಾಯಿತು. ಮೊದಲಿಗೆ ಈ ರೀತಿಯ ಕರೆಗಳು  ಐಸಿಸ್ ನಂಥ ಭಯೋತ್ಪಾದಕ ಸಂಘಟನೆಗಳಿಂದ ಬಂದವು... ಆದರೆ ಇದೆ ರೀತಿಯ ಕರೆಗಳು, ಆಶಯಗಳು ಮುಸ್ಲಿಮರ ಧರ್ಮಗುರುಗಳ ಕಡೆಯಿಂದಲೂ ಬಂದವು. ಭಾರತದಲ್ಲಿ ಕೊರೋನಾ ಇನ್ನೂ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡೇ ಇರದಿದ್ದ ಸಮಯದಲ್ಲೇ... ಅಂದರೆ ೨೦೨೦ರ ಫೆಬ್ರವರಿ ೨೬ ರಂದೇ  ಪಶ್ಚಿಮ ಬಂಗಾಳದ ಖ್ಯಾತ ಯುವ ಇಸ್ಲಾಮಿಕ್ ಧರ್ಮ ಪ್ರಚಾರಕ, ಮೌಲಾನಾ ಅಬ್ಬಾಸ್ ಸಿದ್ದಿಖೀ ಇದನ್ನು ಬಹಿರಂಗ ಸಭೆಯಲ್ಲೇ ಹೇಳಿದ್ದ... ಆಗಷ್ಟೇ ದೆಹಲಿಯಲ್ಲಿ ಕೋಮು ಗಲಭೆಯಾಗಿತ್ತು... ಆ ಸಂಧರ್ಭದಲ್ಲಿ ಸಾರ್ವಜನಿಕವಾಗಿ ಭಾರೀ ಜನಸ್ತೋಮದೆದುರು ಪ್ರವಚನ ಮಾಡಿದ ಮೌಲಾನಾ ..." ಇತ್ತೀಚಿಗೆ ಮಸೀದಿಗಳಿಗೆ ಬೆಂಕಿ ಹಚ್ಚಿ ನಾಶ ಮಾಡಿದ ಸಂಗತಿಗಳನ್ನು ಕೇಳಿದ್ದೇನೆ (ದೆಹಲಿ ಕೋಮುಗಲಭೆಯಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಯಿತೆಂಬ ಸುದ್ದಿಯ ಬಗ್ಗೆ )... ಇನ್ನೊಂದು ತಿಂಗಳ ಒಳಗೆ ಏನೋ ಒಂದು ಘಟನೆ ಸಂಭವಿಸಬಹುದೆಂದು ನನಗೆ ಅನಿಸುತ್ತಿದೆ... ಅಲ್ಲಹುವು ನಮ್ಮ ಪ್ರಾರ್ಥನೆಯನ್ನು ಮನ್ನಿಸಲಿ.... ಅಲ್ಲಹುವು ಅದೆಂಥಾ ಭೀಕರವಾದ ಒಂದು ವೈರಸ್ಸನ್ನು ಈ ಭೂಮಿಗೆ ಕಳುಹಿಸಬೇಕೆಂದರೆ .... ಹತ್ತರಿಂದ... ಇಪ್ಪತ್ತರಿಂದ... ಐವತ್ತು ಕೋಟಿಯವರೆಗೆ ಜನರು ಭಾರತದಲ್ಲಿ ಸಾಯಬೇಕು... ನಾವು ಹೇಳೋದರಲ್ಲಿ ಏನಾದರೂ ತಪ್ಪಿದೆಯೇ..?.... ಇದು ಅತ್ಯಂತ ಆನಂದದಾಯಕ ಸಂಗತಿ...."  ಅಬ್ಬಾಸ್ ಸಿದ್ದಿಖೀಯ ಮಾತಿಗೆ ಅಲ್ಲಿ ಸೇರಿದ್ದ ಜನಸ್ತೋಮ ಭಾರೀ ಚಪ್ಪಾಳೆ ಶಿಳ್ಳುಗಳ ಮೂಲಕ ಪ್ರತಿಕ್ರಿಯಿಸುತ್ತದೆ... ಉತ್ತೇಜಿತನಾದ ಸಿದ್ಧಿಖೀ " ಸ್ವತಹಾ ನಾನೇ ಬಲಿಯಾದರೂ ಲೆಕ್ಕಿಸುವುದಿಲ್ಲ... ಆದರೆ ನನ್ನೊಂದಿಗೆ ಕೋಟಿಗಟ್ಟಲೆ ಹಿಂದೂಗಳನ್ನೂ ಕರೆದುಕೊಂಡು ಹೋಗುತ್ತೇನೆ...." ಅಂತ ಮತ್ತೊಮ್ಮೆ ಚಪ್ಪಾಳೆ ಗಿಟ್ಟಿಸಿದ... ಇದು ಭಾರತದಲ್ಲಿ ಕೊರೋನಾ ಲಾಕ್ ಡೌನ್ ಶುರುವಾಗುವುದಕ್ಕಿಂತ ತುಂಬಾ ಮೊದಲು ನಡೆದ ಘಟನೆ... 
 
ಇದರ ಬಳಿಕ ತಬ್ಲೀಘಿಗಳ ಮುಖಂಡ ಮೌಲಾನಾ ಸಾದ್ ಮತ್ತವನ ಸಹಚರರು ಮಾಡಿದ ಭಾಷಣಗಳು, ನೀಡಿದ ಕರೆಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ... ಅದರ ಬಗ್ಗೆ ಈ ಹಿಂದಿನ ಲೇಖನಗಳಲ್ಲಿ ವಿವರವಾಗಿಯೇ ಬರೆದಿದ್ದೇನೆ ಕೂಡಾ... ಆದರೆ ಮುಸಲ್ಮಾನ ಧರ್ಮಗುರುಗಳು ಈ ರೀತಿಯಲ್ಲಿ ಕೊರೋನಾ ಸೋಂಕನ್ನು ಇತರೆಲ್ಲಾ ಮತಧರ್ಮದವರಂತೆ ನೋಡದೆ ಇದನ್ನು ಜಿಹಾದೀ ದೃಷ್ಟಿಕೋನದಿಂದ ನೋಡಿದ್ದು ... ಅದೂ ಕೂಡಾ ಏಕಪ್ರಕಾರವಾಗಿ ಜಾಗತಿಕ ಮಟ್ಟದಲ್ಲಿ ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದು ನಿಜಕ್ಕೂ ಆಶ್ಚರ್ಯಕರ ಮತ್ತು ಭಯಾನಕ... 
 
ಈ ಪ್ರವಚನ, ಹೇಳಿಕೆಗಳೆಲ್ಲಾ ಬರೀ ಮಾತುಗಳಾಗಿ ಉಳಿಯಲಿಲ್ಲ... ಬದಲಿಗೆ ಕೃತಿಗಳ ರೂಪಕ್ಕೆ ಇಳಿದ ವಿಕೃತಿಯಾಯಿತು... ಕೊರೋನಾ ಸೋಂಕನ್ನು ಭಾರತದಲ್ಲಿ ಹಬ್ಬಿಸಲಿಕ್ಕೋಸ್ಕರವೇ ತಾವೇ ವೈರಸ್ ಸೋಂಕಿಗೊಳಗಾಗಿ ಮಾನವ ಬಾಂಬ್ ಗಳ  ರೀತಿ ತಾವೂ ಸತ್ತು ಇತರರಿಗೂ ಸೋಂಕು ಹಬ್ಬಿಸಿ ಎಲ್ಲೆಡೆಗೂ ಕೊರೋನಾ ಪಸರಿಸುವ ಒಂದು ಭೀಕರ ಸಂಚು ರೂಪಿಸಲಾಯಿತು... ಈ ಸೋಂಕು ಎಂಜಲಿನ ಮೂಲಕವೇ ಹರಡುವುದೆಂಬುದು ಖಚಿತವಾದದ್ದರಿಂದ  ಎಂಜಲು ಉಗುಳಿ ಉಗುಳಿಯೇ ನಂಜು ಹರಡುವ ಸಂಚು ರೂಪಿಸಲಾಯಿತು ...! ಇದು ತಬ್ಲೀಘಿಗಳಿಂದಲೇ ಶುರು ಕೂಡಾ ಆಯಿತು... ! ಅದರ ಕೆಲವೊಂದು ಉದಾಹರಣೆಗಳು ಇಲ್ಲಿವೆ. 
 
  • ಮಾರ್ಚ್ ೨೨ ನೇ ತಾರೀಕು ಉತ್ತರ ದಿಲ್ಲಿಯ ವಿಜಯನಗರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈಶಾನ್ಯ ಭಾರತದ ಮಣಿಪುರ ಮೂಲದ ಮಹಿಳೆಯೊಬ್ಬರ ಮೇಲೆ ಬಿಳಿ ಬಣ್ಣದ ಸ್ಕೂಟಿಯಲ್ಲಿ ಬಂದ  ವ್ಯಕ್ತಿಯೊಬ್ಬ ಏಕಾಏಕಿ ಉಗುಳಿ ಆಕೆಯನ್ನೇ "ಕೊರೋನಾ" ಅಂತ ಕರೆದು ಪರಾರಿಯಾದ... ಆತನ ಮೇಲೆ ಕೇಸು ದಾಖಲಾಯಿತು. 
  • ಮಾರ್ಚ್ ತಿಂಗಳಲ್ಲೇ ಓರ್ವ ತಳ್ಳು ಗಾಡಿ ವ್ಯಾಪಾರಿ ತನ್ನ ಗಾಡಿಯಲ್ಲಿನ ಹಣ್ಣುಗಳಿಗೆ ಎಂಜಲು ಹಚ್ಚುತ್ತಿದ್ದುದ್ದನ್ನು ಯಾರೋ ವಿಡಿಯೋ ಮಾಡಿ ಅದು ವೈರಲ್ ಆಗಿತ್ತು. ತನಿಖೆ ನಡೆಸಿದಾಗ ಆತ ಮಧ್ಯಪ್ರದೇಶದ ರೈಸೆನ್ ಎಂಬಲ್ಲಿನ ತಳ್ಳುಗಾಡಿ ವ್ಯಾಪಾರಿ ಶೇರೂ  ಮಿಯಾ ಅನ್ನೋದು ತಿಳಿಯಿತು. ಏಪ್ರಿಲ್ ಮೂರನೆಯ ತಾರೀಕಿಗೆ ಬೋಧಿರಾಜ್ ಟಿಪ್ಟ್ ಎಂಬಾತನ ದೂರಿನ ಮೇಲೆ ಕೇಸು ದಾಖಲಿಸಿ ಮಿಯಾನನ್ನು ಬಂಧಿಸಲಾಯಿತು. 
  • ಏಪ್ರಿಲ್ ೧ ನೇ ತಾರೀಕು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿದ್ದ ತಬ್ಲೀಘಿ ಗಳನ್ನು   ಬಸ್ ಗಳಲ್ಲಿ  ಕ್ವಾರಂಟೈನ್ ಶಿಬಿರಗಳಿಗೆ ಸಾಗಿಸಲಾಗುತ್ತಿತ್ತು. ಬಸ್ ಗಳಲ್ಲಿ ಇದ್ದ ತಬ್ಲೀಘಿಗಳ  ಪೈಕಿ ಹಲವಾರು ಜನರಿಗೆ ಕೊರೋನಾ ಸೋಂಕಿನ ಲಕ್ಷಣಗಳಿದ್ದವು.. ಕೊರೋನಾ ಬಗ್ಗೆ ಅವರಿಗೆಲ್ಲಾ ಎಷ್ಟೇ ಅರಿವು ಮೂಡಿಸಿದರೂ ಬ್ರೈನ್ ವಾಷ್ ಆದ ಸ್ಥಿತಿಯಲ್ಲಿದ್ದ ಆ ಜನ ಕೊರೋನಾ ಮಾಹಾಮಾರಿಯ ಅಪಾಯವನ್ನು ಮನಗಾಣಲು ಇಲ್ಲ. ಬಾಸ್ ಸಾಗುತ್ತಿದ್ದಾಗ ದಾರಿಯುದ್ದಕ್ಕೂ ಕಿಟಕಿಯಿಂದ ಹೊರಗೆ ಉಗುಳುತ್ತಿದ್ದರು ಇವರು. 
  • ಏಪ್ರಿಲ್ ೧ ನೇ ತಾರೀಕು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿದ್ದ ತಬ್ಲೀಘಿ ಗಳ ಪೈಕಿ ೧೬೭ ಜನರನ್ನು ಐದು ಬಸ್ ಗಳಲ್ಲಿ ತುಘಲಕಾಬಾದ್ ನಲ್ಲಿನ ರೈಲ್ವೆ ಕ್ವಾರಂಟೈನ್ ಶಿಬಿರಕ್ಕೆ ಸಾಗಿಸಿ ಅಲ್ಲಿನ ತರಬೇತಿ ಶಾಲೆಯ ಹಾಸ್ಟೆಲ್ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಬ್ಯಾರಕ್ ನಲ್ಲಿ ಇಡಲಾಗಿತ್ತು... ಆದರೆ ಅಲ್ಲಿನ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡ ತಬ್ಲೀಘಿ ಗಳು ಕಟ್ಟಡದೊಳಗೆ ಮಾತ್ರವಲ್ಲದೆ ಸಿಬ್ಬಂದಿಯ ಮೈ ಮೇಲೂ ಉಗುಳಿ ದಾಂಧಲೆ ಎಬ್ಬಿಸಿದರು. ನಿಜಾಮುದ್ದೀನ್ ನಿಂದ   ತುಘಲಕಾಬಾದ್ ನಲ್ಲಿನ ರೈಲ್ವೆ ಕ್ವಾರಂಟೈನ್ ಶಿಬಿರಕ್ಕೆ ಸಾಗುವ ದಾರಿಯುದ್ದಕ್ಕೂ ಬಸ್ ಗಳ  ಕಿಟಕಿಯಿಂದ ಹೊರಗೆ ಉಗುಳುತ್ತಿದ್ದರು..
  • ಏಪ್ರಿಲ್ ೨ ನೇ ತಾರೀಕು ನಾಸಿಕ್ ನ ಮುಸಲ್ಮಾನನೊಬ್ಬ ಟಿಕ್ ಟಾಕ್ ವಿಡಿಯೋದಲ್ಲಿ ಐದುನೂರು ರೂಪಾಯಿಗಳ ಗರಿಗರಿ ನೋಟುಗಳಲ್ಲಿ ಮೂಗು ಬಾಯಿ ಒರೆಸಿಕೊಳ್ಳುತ್ತಾ... "ಎನ್.ಆರ್.ಸಿ. ಕಾನೂನು ಜಾರಿಗೆ ತಂದವರ ವಿರುದ್ಧ ಕೊರೋನಾ ವೈರಸ್ ಅಲ್ಲಾಹುವೇ  ಕಳಿಸಿದ ಶಿಕ್ಷೆ, ಇದು ಅಲ್ಲಾಹುವಿನ  ಎನ್.ಆರ್.ಸಿ..."  ಅಂತ ಹೇಳಿದ್ದ. ಆತನ ಉದ್ದೇಶ ನೋಟುಗಳ ಮೂಲಕ ಸೋಂಕು ಹರಡುವುದಾಗಿತ್ತು. ಪೊಲೀಸರು ಆತನನ್ನು ಬಂಧಿಸಿ ಬೆಂಡೆತ್ತಿದ್ದರು...
  • ಏಪ್ರಿಲ್ ೪ ನೇ ತಾರೀಕು ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಲ್ಲಿನ ಹಿಂದ್ಪಿರಿ ಪ್ರದೇಶದ ನಿವಾಸಿಗಳು ಅಲ್ಲಿನ ಪೌರ ಕಾರ್ಮಿಕರು ಮತ್ತು ಸ್ಯಾನಿಟೇಷನ್ ಕೆಲಸಗಾರರ ಮೇಲೆ ಉಗುಳಿದ್ದರಿಂದ, ಮತ್ತು ಎಂಜಲು ಹಚ್ಚಿದ ಹತ್ತು ರೂಪಾಯಿ ನೋಟುಗಳನ್ನು ಅವರತ್ತ ಎಸೆದುದರಿಂದ , ಭೀತರಾದ ಪೌರ ಕಾರ್ಮಿಕರು  ಮತ್ತು ಸ್ವಚ್ಛತಾ ಸಿಬಂದಿ  ಆ ಪ್ರದೇಶವನ್ನು "ನಾವು ಸ್ವಚ್ಛಗೊಳಿಸುವುದಿಲ್ಲ" ಅಂಟ್ ಪ್ರತಿಭಟಿಸಿದರು. ಹಿಂಡ್ಪಿರಿ  
  • ಬೇಕರಿಯೊಂದರಲ್ಲಿ ಬ್ರೆಡ್ ತಯಾರಿಸುವಾತ ತಾನು ತಯಾರಿಸಿದ ಬ್ರೆಡ್ ಅನ್ನು ಸ್ಲಾಯ್ಸ್ ಗಳಾಗಿ ಕತ್ತರಿಸುವಾಗ ಬ್ರೆಡ್ ಗೆ ಉಗುಳುತ್ತಿರುವ ಟಿಕ್ ಟಾಕ್ ವಿಡಿಯೋ ಒಂದು ವೈರಲ್ ಆಯಿತು. ತನಿಖೆ ನಡೆಸಿದಾಗ ಆ ಬೇಕರಿ ಮಹಾರಾಷ್ಟ್ರದಲ್ಲಿನ ಅಮರಾವತಿಯಲ್ಲಿ ಇರುವುದಾಗಿಯೂ ಬ್ರೆಡ್ ಗೆ ಎಂಜಲು ಉಗುಳಿದಾತನ ಹೆಸರು ಅಬ್ದುಲ್ ನಝೀಮ್  ಶೇಖ್ ಮಹಮೂದ್ ಎಂದು ಗೊತ್ತಾಯಿತು. ಬೇಕರಿ ಮಾಲಕ ಕೂಡಾ ಮುಸ್ಲಿಂ ಆಗಿದ್ದು ಆತನ ದೂರಿನಂತೆ  ಅಬ್ದುಲ್ ನಝೀಮ್  ಶೇಖ್ ಮಹಮೂದ್ ಮತ್ತು ಇನ್ನೊಬ್ಬ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದರು. 
  • ಬಿಹಾರದ ಸಹರ್ಸಾ ಸಾದರ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ತಬ್ಲೀಘಿ ಕಾರ್ಯಕರ್ತರು ಅಲ್ಲಿನ ನರ್ಸ್ ಗಳ  ಜೊತೆಗೆ ಅಸಂಬದ್ಧವಾಗಿ, ಅಶ್ಲೀಲವಾಗಿ ವರ್ತಿಸಿ ಎಂಜಲು ಇರುವ ಮಾಸ್ಕ್ ಗಳನ್ನೂ ನರ್ಸ್ ಗಳ ಮೇಲೆ ಬಿಸಾಡಿ, ಅದನ್ನು ತಮ್ಮ ಮೊಬೈಲ್ ಗಳಲ್ಲೂ ಚಿತ್ರೀಕರಿಸಿ ಅದನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು  ಆಸ್ಪತ್ರೆಯ ವೈದ್ಯಾಧಿಕಾರಿಗಳ ದೂರಿನ ಮೇರೆಗೆ  ಕೇಸು ದಾಖಲಿಸಿ ತನಿಖೆ ನಡೆಸಿದ ಠಾಣಾಧಿಕಾರಿ ರಾಕೇಶ್ ಕುಮಾರ್ ಸಿಂಗ್ ಕ್ವಾರಂಟೈನ್ ಸೆಂಟರ್ ಗೆ ಭೇಟಿನೀಡಿ, ಆರೋಪಿಗಳ ಮೇಲೆ ಕೇಸು ದಾಖಲಿಸಿ ಅವರಲ್ಲಿದ್ದ ಮೊಬೈಲ್ ಫೋನನ್ನು ವಶಪಡಿಸಿಕೊಂಡರು... 
  • ಏಪ್ರಿಲ್ ೪ ನೇ ತಾರೀಕು ಉತ್ತರಪ್ರದೇಶದ ಕಾನ್ಪುರದಲ್ಲಿನ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ೨೨ ತಬ್ಲೀಘಿ ಗಳ ಪೈಕಿ ಆರು ಜನ ಕೊರೋನಾ ಪಾಸಿಟಿವ್ ಆಗಿದ್ದರು. ಅವರು ಎಲ್ಲೆಂದರಲ್ಲಿ ಉಗುಳುತ್ತಾ ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ಅಸಭ್ಯವಾಗಿ ವರ್ತಿಸಿ ನರ್ಸ್ ಗಳ ಮೇಲೆ ಎಂಜಲು ಉಗುಳಿದರು. ಅವರ ಮೇಲೆ ಕೇಸು ದಾಖಲಾಯಿತು. ಈ ಒಂದು ಘಟನೆಯಿಂದ ಉತ್ತರಪ್ರದೇಶ ಸರಕಾರ ತಬ್ಲೀಘಿ ಗಳಿಗೆ ಶುಶ್ರೂಷೆ ನೀಡಲು ಕೇವಲ ಪುರುಷ ಸಿಬ್ಬಂದಿ ಗಷ್ಟೇ ಅವಕಾಶ ನೀಡುವಂತೆ ಆಜ್ಞೆ ಮಾಡಿತು.  
  • ಏಪ್ರಿಲ್ ೬ ನೇ ತಾರೀಕು ಮಧ್ಯಾಹ್ನ ಮಣಿಪುರದ ಇನ್ನೊಂದು ಯುವತಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದಾತ ಎಂಜಲನ್ನು ಉಗುಳಿ ಪರಾರಿಯಾದ. ಸಂತ್ರಸ್ತೆ ಯುವತಿಯ ಸ್ನೇಹಿತೆ ಈ ಕುರಿತು ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿ ಪೊಲೀಸರ ಸಹಾಯ ಯಾಚಿಸಿದಳು. ಈ ಘಟನೆ ನಡೆದದ್ದು ಮುಂಬೈಯ ಕಲಿನಾದಲ್ಲಿನ ಗೀತಾವಿಹಾರ್ ಜಂಕ್ಷನ್ ನಲ್ಲಿ ದೂರು ಸ್ವೀಕರಿಸಿದ ಪೊಲೀಸರು ಅದ್ಭುತ ಕೆಲಸ ಮಾಡಿದರು.. ಸುಮಾರು ನೂರಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಗಳನ್ನು ನೋಡಿ, ಒಂದೂವರೆ ಲಕ್ಷ ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ಆರೋಪಿ ಅಮೀರ್ ಮೊಹಮ್ಮದ್ ಇಲ್ಯಾಸ್ ನನ್ನ ಬಂಧಿಸಿ ಕೇಸು ಜಡಿದರು... 
  • ಏಪ್ರಿಲ್ ೭ ನೇ ತಾರೀಕಿಗೆ ಮಧ್ಯ ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ತಬ್ಲೀಘಿ ಗಳನ್ನೂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಈ ಮಂದಿ ತಾವಿದ್ದ ಮೂರನೇ  ಮಹಡಿಯ ರೂಮುಗಳಿಂದ ದಕ್ಷಿಣ ಬದಿಯಲ್ಲಿರುವ ಆಪರೇಷನ್ ಥಿಯೇಟರ್ ಕಡೆಗೆ ಉಗುಳುತ್ತಾ ಭಯದ ವಾತಾವರಣ ಸೃಷ್ಟಿಸಿದ್ದರು ಅಂಡ್ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು. 
  • ಏಪ್ರಿಲ್ ೧೨ ನೇ ತಾರೀಕಿಗೆ ರಾಜಸ್ಥಾನದ ಕೋಟಾ ಎಂಬಲ್ಲಿ ಆದಿತ್ಯವಾರ ಬೆಳಗ್ಗೆ ಕೆಲವು ಏರಿಯಾಗಳಲ್ಲಿ ವಿಚಿತ್ರ ಘಟನೆ ಜರಗಿತು ಕೆಲ ಮಂದಿ ಹೆಂಗಸರು ಕೆಲವು ಮನೆಗಳ ಬಳಿಗೆ ಹೋಗಿ, ತಮ್ಮ ಕೈಯಲ್ಲಿದ್ದ ಪಾಲಿಥೀನ್ ಕವರುಗಳಲ್ಲಿ  ಎಂಜಲು ಉಗಿದು ಅದನ್ನು ಮನೆಗಳ ಗೇಟುಗಳ ಒಳಗೆ ಬಿಸಾಡುತ್ತಿದ್ದ ದೃಶ್ಯ ಅನೇಕ ಮನೆಗಳ ಸಿ ಸಿ ಟಿವಿಗಳಲ್ಲಿ ದಾಖಲಾಗಿತ್ತು. ಜನ ಗಾಬರಿಬಿದ್ದು ಪೊಲೀಸರಿಗೆ ದೂರು ನೀಡಿದರು.. 
  • ದೆಹಲಿಯ ನರೇಲಾ ಕ್ವಾರಂಟೈನ್ ಸೆಂಟರ್ ಇಡೀ ದೇಶದಲ್ಲೇ ದೊಡ್ಡದು. ನಿಜಾಮುದ್ದೀನ್ ಮರ್ಕಜ್ ನಲ್ಲಿದ್ದ ತಬ್ಲೀಗ್ಹಿಗಳ ಪೈಕಿ ಸುಮಾರು ಒಂದು ಸಾವಿರದಿನ್ನೂರು  ಜನರನ್ನು ಅಲ್ಲಿ ಇಡಲಾಗಿತ್ತು. ಆದರೆ ಇಲ್ಲಿಯೂ ತಮ್ಮ ಅಸಹಕಾರ ಮತ್ತು ಅಸಹ್ಯಕರ ವರ್ತನೆ ಮುಂದುವರಿಸಿದ ತಬ್ಲೀಘಿಗಳು ಎಲ್ಲೆಂದರಲ್ಲಿ ಉಗುಳುವುದರ ಜೊತೆಗೆ ತಮಗಿತ್ತ ರೂಮುಗಳ ಬಾಗಿಲಲ್ಲೇ ಮಲಮೂತ್ರ ವಿಸರ್ಜನೆ ಮಾಡಿ ಭೀಭತ್ಸಕರ ವಾತಾವರಣ ನಿರ್ಮಿಸಿದ್ದರು. ಕೊನೆಗೆ ಇಷ್ಟು ಸಂಖ್ಯೆಯ ತಬ್ಲೀಘಿ ಗಳನ್ನೂ ನೋಡಿಕೊಳ್ಳಲು ಪೊಲೀಸರಿಗೆ ಕಷ್ಟವೆನಿಸಿ  ಪೂರ್ತಿ  ನರೇಲಾ ಕೇಂದ್ರದ ಸುಪರ್ದಿಯನ್ನೇ ಸೈನ್ಯಕ್ಕೆ ಬಿಟ್ಟುಕೊಡಲಾಯಿತು. 
  • ಏಪ್ರಿಲ್ ೧೨ ನೇ ತಾರೀಖಿಗೆ ಉತ್ತರಪ್ರದೇಶದ ಅಲೀಘರ್ ನ ಬಿಝೆರಾ ಎಂಬ ಹಳ್ಳಿಯಲ್ಲಿ ಬೈಕಲ್ಲಿ ಬಂದ ಇಬ್ಬರು ಯುವಕರು ಜೇಬಿನಿಂದ ಹೊಸಾ ನೋಟುಗಳನ್ನು ಹೊರತೆಗೆದು ಅದಕ್ಕೆ ಉಗುಳಿ ಬಳಿಕ ಆ ನೋಟುಗಳನ್ನು ರಸ್ತೆಯಲ್ಲೆಸೆದು ಹೋದರು. ಇದನ್ನು ಹೊಲದಲ್ಲಿ ಕೆಲಸಮಾಡುವ ಓರ್ವ ಮಹಿಳೆ ನೋಡಿದ್ದು, ಈ ವಿಷಯ ಹಳ್ಳಿಗರಲ್ಲಿ ಸುದ್ದಿಯಾಯಿತು. ಪೊಲೀಸರಿಗೆ ಕರೆ ಹೋಗಿ, ಅವರು ಬಂದು ಈ ನೋಟುಗಳನ್ನು ಜಾಗರೂಕವಾಗಿ ಸೀಜ್ ಮಾಡಿದರು. 
  • ಏಪ್ರಿಲ್ ೧೩ ನೇ ತಾರೀಕು ತಮಿಳುನಾಡಿನ ತಿರುಚ್ಚಿ ಯ ಮಹಾತ್ಮಾ ಗಾಂಧೀ ಮೆಮೋರಿಯಲ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ದಾಖಲಾಗಿದ್ದ ತಬ್ಲೀಘಿ ಜಮಾಅತಿನ ವ್ಯಕ್ತಿಯೊಬ್ಬ ವೈದ್ಯಕೀಯ ಸಿಬ್ಬಂದಿಗೆ ತೀರಾ ಅಸಹಕಾರ ತೋರುತ್ತಿದ್ದ. ಆತ ಕೊರೋನಾ ಪಾಸಿಟಿವ್  ವ್ಯಕ್ತಿಯಾಗಿದ್ದುದರಿಂದ ಸಿಬ್ಬಂದಿ ಜಾಗರೂಕರಾಗಿದ್ದರು. ತೀರಾ ಉಡಾಳನಂತೆ ವರ್ತಿಸುತ್ತಿದ್ದ ಆತ ಧರಿಸಿದ್ದ ಮಾಸ್ಕ್ ಅನ್ನು ತೆಗೆದು ನರ್ಸ್ ಕಡೆಗೆ ಬಿಸಾಡಿ ಆಕೆಯ ಮೈಮೇಲೆ ತನ್ನ ಎಂಜಲನ್ನು ಉಗಿದ... ವೈದ್ಯಕೀಯ ಸಿಬ್ಬಂದಿಯ ದೂರಿನಂತೆ ಆತನ ಮೇಲೆ ಕೇಸು ದಾಖಲಿಸಲಾಯಿತು. 
  • ಏಪ್ರಿಲ್ ೧೩ ರಂದು ಕಲಬುರ್ಗಿಯ ಧನ್ವಂತರಿ ಆಸ್ಪತ್ರೆಯ ಸಮೀಪ ಓಡಾಡುತ್ತಾ ಅನುಮಾನಾಸ್ಪದವಾಗಿ ರಸ್ತೆಯಲ್ಲೆಲ್ಲಾ ಉಗುಳುತ್ತಾ ಓಡಾಡುತ್ತಿದ್ದ ಓರ್ವ ಯುವಕನನ್ನು ಸ್ಥಳೀಯರ ಕೋರಿಕೆಯಂತೆ ಬಂಧಿಸಿದರು. ಆತ. ವಿ. ಕೆ. ಸಾಲ್ಗಾರ್ ಎಂಬ ಅಲ್ಲಿಯವನಾಗಿದ್ದು ಆತನ ಹೆಸರು ರಬಾನಿ ಅಂತ ಗೊತ್ತಾಯಿತು. ಆತನ ಮೇಲೆ ಕೇಸು ದಾಖಲಿಸಲಾಯಿತು. 
  • ಏಪ್ರಿಲ್ ೨೪ ರಂದು ರಾಜಸ್ಥಾನದ ಸಾರ್ಸರ ಎಂಬ ಹಳ್ಳಿಯೊಂದರಲ್ಲಿ ಘಡ್ಸೀ ರಾಮ್ ಎಂಬಾತನ ಮನೆಯ ಮುಂದೆ ಸುಮಾರು ಹದಿಮೂರುವರೇ ಸಾವಿರ ರೂಪಾಯಿ ಮೌಲ್ಯದ ಹೊಸ ಐದುನೂರು ರೂಪಾಯಿಗಳ ನೋಟುಗಳನ್ನು ಚೆಲ್ಲಲಾಗಿತ್ತು. ಇನ್ಸ್ಪೆಕ್ಟರ್ ಮಹೇಂದ್ರ ದತ್ತ  ಶರ್ಮಾ ಆ ನೋಟುಗಳನ್ನು ಸೀಜ್ ಮಾಡಿ ಪೂರ್ತಿ ಏರಿಯಾವನ್ನು ಸ್ಯಾನಿಟೈಜ್ ಮಾಡಿದರು. 
  • ರಾಜಸ್ಥಾನದಲ್ಲೇ ಇನ್ನೊಂದು ಘಟನೆ ನಡೆದು, ಸುಜಾನ್ ಘರ್ ಎಂಬಲ್ಲಿನ ಸಿಮೆಂಟ್ ಫ್ಯಾಕ್ಟರಿಯೊಂದರ ಪಕ್ಕ ರಸ್ತೆಯಲ್ಲಿ ಹೀಯೇ ಐನೂರರ ನೋಟುಗಳು ಪತ್ತೆಯಾದವು. ಸಬ್ ಇನ್ಸ್ಪೆಕ್ಟರ್ ದಿಲೀಪ್ ಸಿಂಗ್ ಆ ನೋಟುಗಳನ್ನು ವಶಪಡಿಸಿಕೊಂಡು ಆ ಪ್ರದೇಶವನ್ನು ಸ್ಯಾನಿಟೈಜ್ ಮಾಡಿದರು. 
  • ಮೇ ೧೭ ನೇ ತಾರೀಕು ಹುಬ್ಬಳ್ಳಿಯ ನೇಕಾರಗಲ್ಲಿ ಬಳಿ ರಾತ್ರಿ ಹೋಟೆಲ್ ಒಂದರಲ್ಲಿ ತನಗೆ ಆಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಲೀಂ ಬಳ್ಳಾರಿ ಎಂಬಾತ ಹೋಟೆಲ್ ಕೆಲಸಗಾರರ ಮೈ ಮೇಲೆ ಉಗುಳಿ ದಾಂಧಲೆ ಎಬ್ಬಿಸಿದ್ದ. ಕಂಠಪೂರ್ತಿ ಕುಡಿದಿದ್ದ ಆತನನ್ನು ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೊಪ್ಪಿಸಿದರು. ಬಳಿಕ ಆತ ಕೊಲೆಪ್ರಕರಣದಲ್ಲಿ ತಲೆತಪ್ಪಿಸಿಕೊಂಡಿದ್ದ ಹಳೆಯ ಆರೋಪಿ ಎಂಬುದು ಬಯಲಾಯಿತು. 
ಕೊರೋನಾ ಸೋಂಕು ಜಗತ್ತನ್ನೆಲ್ಲ ವ್ಯಾಪಿಸತೊಡಗುತ್ತಿರುವಾಗ, ಮತ್ತು ಅದರ ಹರಡುವಿಕೆ ಹೆಚ್ಚಾಗಿ ಎಂಜಲಿನ ಮೂಲಕವೇ ಆಗುತ್ತದೆ (ಡ್ರಾಪ್ಲೆಟ್ ಸ್ಪ್ರೆಡ್ ) ಅನ್ನುವುದು ಗೊತ್ತಾಗುತ್ತಿದ್ದಂತೆಯೇ ಈ ರೀತಿ ಎಂಜಲನ್ನೇ ಒಂದು ರೀತಿಯಲ್ಲಿ ಆಯುಧದ ಹಾಗೆ ಉಪಯೋಗಿಸುವ ಒಂದು ಟ್ರೆಂಡ್ ಜಾಗತಿಕವಾಗಿಯೇ ಶುರುವಾಯಿತು. ಹೀಗೆ ಎಂಜಲು ಉಗುಳಿ ಆ ಮೂಲಕ ಕೊರೋನಾ ಸೋಂಕು ಹರಡುವ ಸಂಚು ಮಾಡಲಾಯಿತು. ಈ ಉಗುಳುವ ಹುಚ್ಚು ಭಾರತದಲ್ಲಿ ಮಾತ್ರ ಅಲ್ಲ. ವಿದೇಶಗಳಲ್ಲೂ ಇವೆ. ಆದರೆ ಇಂಥಾ ಪ್ರಕರಣಗಳು ವರದಿಯಾಗೋದೇ ತೀರಾ ಅಪರೂಪ ಮತ್ತು ಪೊಲೀಸ್ ಕೇಸ್ ಆಗುವ ಸಂಭವ ತೀರಾ ಕಡಿಮೆ... ಹಾಗಾಗಿ ಈಗ ನಮ್ಮ ಗಮನಕ್ಕೆ ಬಂದಿರೋ ಪ್ರಕರಣಗಳೆಲ್ಲಾ ಕೇವಲ ಅಲ್ಪ ಪ್ರಮಾಣದ್ದು. ಇಡೀ ದೇಶದಲ್ಲಿ ಕೊರೋನಾ ಸೋಂಕು ಹಬ್ಬುವಲ್ಲಿ ಈ ಎಂಜಲಿನ... ಉಗುಳಿನ ಪಾತ್ರ ಎಷ್ಟು ಎಂಬುದು ಎಂದಿಗೂ ಎಂದೆಂದಿಗೂ ಬಯಲಾಗದ ಚಿದಂಬರ ರಹಸ್ಯ.

Related posts