Infinite Thoughts

Thoughts beyond imagination

ಆಧುನಿಕ ಚಾಣಕ್ಯ ಅಮಿತ್ ಷಾ ಜೀಯವರಿಗೆ ಹುಟ್ಟುಹಬ್ಬದ ಶುಭಾಶಯಗಳು

ಆಧುನಿಕ ಚಾಣಕ್ಯ ಅಮಿತ್ ಷಾ ಜೀಯವರಿಗೆ ಹುಟ್ಟುಹಬ್ಬದ ಶುಭಾಶಯಗಳು 

नवो-नवो भवति जायमानो.अह्नां केतुरुषसामेत्यग्रम |

 

भागं देवेभ्यो वि दधात्यायन प्र चन्द्रमास्तिरतेदीर्घमयुः ||

ಭಾರತ ದೇಶ ಇವತ್ತು ಶ್ರೀ ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ಜಾಗತಿಕವಾಗಿ ಅತ್ಯಂತ ಪ್ರಬಲವಾಗಿ ಬೆಳೆದು ನಿಂತಿದೆಯೆಂದರೆ, ಅದರ ಹಿಂದೆ ಅಮಿತ್  ಷಾ  ಎಂಬ ಅಪ್ರತಿಮ ನಿಷ್ಠಾವಂತರೊಬ್ಬರ ಶ್ರಮ ಮತ್ತು ನಿಷ್ಕಾಮ ಕರ್ಮದ ಬಹುದೊಡ್ಡ ಕೊಡುಗೆಯಿದೆ. ಶ್ರೀ ನರೇಂದ್ರ ಮೋದೀಜಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಬಳಿಕ ದೇಶ ಪ್ರಧಾನಿಯಾಗಿ ಯಶಸ್ಸು ಕಾಣುವುದರ ಹಿಂದೆ ಶ್ರೀ ಅಮಿತ್ ಷಾ ಅವರ ಪಾತ್ರ ಬಹಳ ದೊಡ್ಡದಿದೆ... ೨೦೧೪ ರ ಮಹಾಚುನಾವಣೆಯಲ್ಲಿ ಉತ್ತರಪ್ರದೇಶದ ಚುನಾವಣಾ ಉಸ್ತುವಾರಿಯ ಹೊಣೆ ಹೊತ್ತಿದ್ದ ಶ್ರೀ ಅಮಿತ್ ಷಾ ಜೀಯವರು ಅವತ್ತು ಎಂಭತ್ತು ಸ್ಥಾನ ಗಳ ಪೈಕಿ ಎಪ್ಪತ್ತಮೂರನ್ನು ಗೆದ್ದು ಭಾರತದ ರಾಜಕೀಯ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆಯನ್ನು ಬರೆಯದೆ ಹೋಗಿರುತ್ತಿದ್ದರೆ... ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರವೂ ಅಧಿಕಾರಕ್ಕೆ ಬರುತ್ತಿರಲಿಲ್ಲ... ಶ್ರೀ ನರೇಂದ್ರ ಮೋದೀಜಿಯವರು ಪ್ರಧಾನಿಯೂ ಆಗುತ್ತಿರಲಿಲ್ಲ... ಬಹುತೇಕರಿಗೆ ಇನ್ನೊಂದು ವಿಷಯ ಗೊತ್ತಿಲ್ಲ. ಅಮಿತ್ ಷಾ ಅವರು ಭಾರತದ ಅತ್ಯಂತ ಕಿರಿಯ ಗೃಹ ಮಂತ್ರಿ..! ತಮ್ಮ ಐವತ್ತನಾಲ್ಕನೆಯ ವಯಸ್ಸಿಗೇ ದೇಶದ ಗೃಹಮಂತ್ರಿಯಂಥ ಅತ್ಯಂತ ಜವಾಬ್ದಾರಿಯುತ ಸ್ಥಾನಕ್ಕೆ ಏರಿದ್ದು ಒಂದು ದಾಖಲೆಯಾದರೆ, ದಶಕಗಳಿಂದಲೂ ಕಾಶ್ಮೀರವನ್ನು ಭಾರತದೇಶದಿಂದ ಪ್ರತ್ಯೇಕಿಸುವಂಥ ರೀತಿಯ ೩೭೦ ನೇ ವಿಧಿಯನ್ನು ರದ್ದುಗೊಳಿಸಿ ಕಾಶ್ಮೀರವನ್ನು ಮತ್ತೆ ಭಾರತದ ತೆಕ್ಕೆಯೊಳಗೆ ತಂದದ್ದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸಾಧನೆ... 

ಹಾಗಾಗಿಯೇ ಭಾರತದ ಜನತೆ ಶ್ರೀ ಅಮಿತ್ ಷಾ ಜೀಯವರನ್ನು ಪ್ರೀತಿಯಿಂದ 'ಆಧುನಿಕ ಚಾಣಕ್ಯ' ಅಂತ ಕರೆಯೋದು... ನಿಜಕ್ಕೂ ಅವರು ಆ ಉಪಾಧಿಗೆ ಅತ್ಯಂತ ಅರ್ಹ ವ್ಯಕ್ತಿ... ಇವತ್ತು ಈ ಆಧುನಿಕ ಚಾಣಕ್ಯನ ಐವತ್ತಾರನೆಯ ಹುಟ್ಟುಹಬ್ಬ. ಭಗವಂತ ಅವರಿಗೆ  ಆಯುರಾರೋಗ್ಯ ಸಕಲೈಶ್ವರ್ಯಗಳನ್ನು ದಯಪಾಲಿಸಿ ಈ ದೇಶಕ್ಕೆ ಅವರಿಂದ ಇನ್ನಷ್ಟು ಹೆಚ್ಚಿನ ಸೇವೆ ಸಿಗುವಂತಾಗಲಿ ಅಂತ ಪ್ರಾರ್ಥನೆ... 

 

Related posts