ಸಮುದ್ರದಲ್ಲಿ ಕಾಣೆಯಾದ ಬೋಟ್ ಉಗ್ರಗಾಮಿಗಳು ಹೊತ್ತೊಯ್ದರೇ! ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜನಾಥ್ ಸಿಂಗ್ ಗೆ ಪತ್ರ ಬರೆದು ಮನವಿ!

ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸ್ವರ್ಣ ತ್ರಿಬುಜಾ ಎಂಬ ಏಳು ಜನರಿದ್ದ ಮೀನುಗಾರಿಕಾ ಬೋಟ್ ಮಹರಾಷ್ಟ್ರದ ಗಡಿಯಿಂದ ಕಾಣೆಯಾಗಿ ಸಾಕಷ್ಟು ಅನುಮಾನ ಮೂಡಿದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದರೂ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದ್ದಾರೆ.
ತಕ್ಷಣದಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವ ಅವರು ಮುಂಬೈ ದಾಳಿ ವೇಳೆ ಸ್ಥಳೀಯ ಮೀನುಗಾರರ ಬೋಟನ್ನು ಅಪಹರಿಸಿ ದಾಳಿ ಮಾಡಿದಂತೆ ಇದೂ ಕೂಡ ಭಯೋತ್ಪಾದಕರ ಕೃತ್ಯ ನಡೆಯುವ ಸಾಧ್ಯತೆಗಳಿದ್ದು ತಕ್ಷಣದಲ್ಲಿ ಕ್ರಮ ಕೈಗೊಳ್ಳುವಂತೆ ಕಾಣೆಯಾದ ಏಳು ಜನರ ಹೆಸರನ್ನು ನಮೋದಿಸಿ ಪತ್ರ ಬರೆದಿದ್ದಾರೆ.
ಘಟನೆ ಏನು?
ಉಡುಪಿಯ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಕಳೆದ ಒಂಬತ್ತು ದಿನಗಳಿಂದ ಬೋಟು ಸಮೇತ ನಾಪತ್ತೆಯಾಗಿದ್ದಾರೆ.
ಬೋಟ್ ಮಾಲಕ ಉಡುಪಿಯ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್ ರವಿ, ಹರೀಶ್, ರಮೇಶ್,
ಜೋಗಯ್ಯ ಎಂದು ಗುರುತಿಸಲಾಗಿದೆ.
ಸುವರ್ಣತ್ರಿಭುಜ ಎಂಬ ಮೀನುಗಾರಿಕಾಬೋಟಿನಲ್ಲಿ ಯಡಿಸೆಂಬರ್ 13 ರಂದು ರಾತ್ರಿ 11 ಗಂಟೆ ಸುಮಾರಿಗೆ ಮಲ್ಪೆಬಂದರಿನಿಂದಆಳ ಸಮುದ್ರಮೀನುಗಾರಿಕೆಗೆ ತೆರಳಿದ್ದರು.ಡಿಸೆಂಬರ್ 15 ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಇವರು ನಂತರಸಂಪರ್ಕ ಸಿಗದೇ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಮೀನುಗಾರಿಕಾ ಇಲಾಖೆ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡದ್ದು ,ಮಂಗಳೂರು ಮತ್ತು ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ನಾಪತ್ತೆಯಾದ ಬೋಟ್ ಮತ್ತು ಮೀನುಗಾರರ ಕುರಿತು ಈತನಕ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಹಿನ್ನಲೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿದ್ದು ಪಾಕಿಸ್ತಾನದ ಉಗ್ರಗಾಮಿಗಳು ಬೋಟ್ ಅಪಹರಿಸಿರಬಹುದೇ ಅಥವಾ ಕಡಲಗಳ್ಳರು ಅಪಹರಿಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.